ಮನವೇ ನಿನಗೆ ತಾಕತ್ತಿದ್ದರೆ....
ಬಾಲ್ಯದಲ್ಲಿ ಕ್ರೋಧವನ್ನು
ಯೌವ್ವನದಲ್ಲಿ ಕಾಮವನ್ನು
ಮುಪ್ಪಿನಲ್ಲಿ ಮತ್ಸರವನ್ನು
ಗೆಲ್ಲೋ ನೋಡೋಣ...
ಶಿವು ಮೋರಿಗೇರಿ
"ಜಗತ್ತಿನ ಎಲ್ಲಾ ಶ್ರೇಷ್ಠರು ಹಿಂದೆದೋ ಒಂದು ದಿನ ಯಾವುದೋ ಒಬ್ಬ ಮೇಷ್ಟ್ರ ಮುಂದೆ ಚಕ್ಕಳ ಬಡಿದು ಕುಳಿತ ಪೆದ್ದು ವಿದ್ಯಾರ್ಥಿಯೇ " ಮುಂದೆ ಅವರು ಶ್ರೇಷ್ಠರಾಗ್ತಾರೆ, ಅದಕ್ಕೆ ಹೇಳೋದು ತಸ್ಮೈ ಶ್ರೀ ಗುರುವೇ ನಮಃ..... .ಶಿವು ಮೋರಿಗೇರಿ
ಯಾವ ನಿರೀಕ್ಷೆಯೂ ಇಲ್ಲದ ಪ್ರೀತಿ
ಯಾವ ಫಲವೂ ಬೇಡದ ಸಲುಗೆ
ಯಾವ ಕಲ್ಮಷವೂ ಇಲ್ಲದ ಅಪ್ಪುಗೆ
ಯಾವ ಮೋಸವೂ ಬಗೆಯದ ಸ್ನೇಹ
ಯಾವ ಯಾವ ಹೃದಯಗಳಲ್ಲಡಗಿವೆಯೋ ತೆಪ್ಪಗೆ
ಶಿವು ಮೋರಿಗೇರಿ
ಗಡಿಗಳೇ ಇಲ್ಲದ ಧರೆಯನು ಕಂಡು
ಬೆಚ್ಚಿಬೀಳದ ದೊರೆಗಳು ಯಾರು ?
ಮನ ಮನಗಳ ನಡುವೆಯೇ ಗೋಡೆಗಳ ಕಂಡು
ಮರುಗುವವರ ನೋವಿನ ಮಾತು ಕೇಳುವವರಾರು ?
ಶಿವು ಮೋರಿಗೇರಿ
ದೇವರ ಹರಸಿ ಗುಡಿಯೊಳಗೋದರೆ
ದೇವರ ಮೂರ್ತಿಯೊಳಗೂ ನೀನೆ
ಭಕ್ತಿಯಿಂದ ಘಂಟೆಯ ಹೊಡೆದರೆ
ಘಂಟೆಯಿಂದ ಹೊರಹೊಮ್ಮಿದ ನಾದವು ನೀನೆ
ಶಿವು ಮೋರಿಗೇರಿ
ಅರ್ಧನಾರೀಶ್ವರನನ್ನು ನಾವು ಗೌರವಿಸ್ತಿವಿ
ಮೋಹಿನಿಯಾದ ಹರಿಯನ್ನು ನಾವು ಗೌರವಿಸ್ತಿವಿ
ಮಹಾಭಾರತಕ್ಕೊಬ್ಬ ಬೃಹನ್ನಳೆಯನ್ನೂ ತಂದಿದಿವಿ
ಪ್ರಸ್ತುತ ಇಂಥಹವರನ್ನು ಸಮಾಜದ ಅಪಶಕುನದಂತೆ ಕಾಣ್ತಿವಿ
ನಿಜಕ್ಕೂ ನಾವೆಂಥಾ ಬ್ರಮೆಯಲ್ಲಿ ಬದುಕ್ತಾ ಇದೀವಿ ?
ಶಿವು ಮೋರಿಗೇರಿ
ಕಲ್ಪಿತ ಭಾವನೆಗಳೇ ಮಿಡಿತವಾಗಿದ್ದ
ಪ್ರೀತಿಯ ತುಡಿತಗಳೇ ಬರಹಗಳಾಗಿದ್ದ
ಬಂಗಾರದ ದಿನಗಳು ಕಳೆದು ಹೋದವು ಯಾಕೋ ?
ಸುಂದರ ಹೂಗಳ ಹೂದೋಟವಾಗಿದ್ದ
ಅದ್ಭುತ ವರ್ಣನೆಗಳ ತವರಾಗಿದ್ದ
ನನ್ನ ಮನವು ಖಾಲಿಯಾಗಿ ಕಮರಿ ನಿಂತದ್ದು ಯಾಕೋ ?
ಶಿವು ಮೋರಿಗೇರಿ
ಹನ್ಮಪ್ಪನ ಗುಡ್ಯಾಗ ನಮಾಜ್ ಮಾಡ್ತಾರೇನ್ರಿ ?
ಮಸೀದ್ಯಾಗ ಯಾವ ಅಭಿಷೇಕ ನಡಿತೈತೇಳ್ರೀ ?
ಬಚ್ಚಲ ಮನ್ಯಾಗ ಭಕ್ತಿ ಹುಟ್ಟುತೈತೇನ್ರಿ ?
ಸಣ್ಣ ಕೂಸು ನನ್ನ ಈ ಪ್ರಶ್ನಿ ಕೇಳಕತ್ಯಾಳ್ರೀ ...
ಶಿವು ಮೋರಿಗೇರಿ
ಮಳಿ ಇಲ್ಲಾ ಬೆಳಿ ಇಲ್ಲ
ನಮ್ಮನ್ನಾಳ ಸರ್ಕಾರಕ್ಕಿನ್ನು ಥಂಡಿ ಬಿಟ್ಟಿಲ್ಲ
ನನ್ನಂಥ ಬಡವನಿಗ್ಯ ಅಕ್ಕಿ ಕಾರ್ಡು ಇಲ್ಲ
ರಾಜ್ಯದ ಪರಿಸ್ಥಿತಿ ಎಂಗೈತೋ ಗೊತ್ತ ಆಗಂಗಿಲ್ಲ
ಪೇಪರ್ ತೆಗದು ನೋಡಾಕ ಮನಸಾ ಬರ್ತಿಲ್ಲ
ಅಂಗಂತ ಎದಿಮ್ಯಾಗ ಬಂದಿರಾ ಎಲೆಕ್ಷನ್ನೂ ಮರಿಯಂಗಿಲ್ಲ
ಎಷ್ಟಾ ಆಗ್ಲಿ ನಾನು ಇದ್ಯಾವಂತ ಅದೀನಲ್ಲ ?
ಯಾರಿಗ್ಯ ಓಟು ಆಕಬೇಕೋ ತಲಿಗ್ಯ ಅತ್ತಂಗಿಲ್ಲ
ಈಗಿನ ಟೈಂನಾಗ ನನಿಗ್ಯಾರೂ ಒಳ್ಳೇರು ಅನ್ನಿಸ್ತಾನೇ ಇಲ್ಲ
ಕರದು ಬುದ್ಧಿ ಹೇಳಾರು ನನಿಗೆ ಕಾಣಿಸ್ತಾನೇ ಇಲ್ಲ
ಶಿವು ಮೋರಿಗೇರಿ
ನಮಗೆ ಈಗ ಇನ್ನೊಬ್ಬ ಗಾಂಧಿ
ಮತ್ತೊಬ್ಬ ಭಗತ್, ವಿವೇಕಾನಂದ
ಭೋಸ್, ಬಸವ, ಬುದ್ಧ, ಘರ್ಜಿಸಿದ ಆ ಮೈಸೂರ ಹುಲಿ ಟಿಪ್ಪು
ಕಿತ್ತೂರ ಒಡತಿ ಚೆನ್ನಮ್ಮ ವೀರ ವನಿತೆ ಓಬವ್ವ
ಬಿ.ಆರ್.ಅಂಬೇಡ್ಕರ್ ಇನ್ನೂ ಯಾರ್ಯಾರೋ ಬೇಕಿದೆ
ಅಂಥ ಮಹನೀಯರ ಅಗತ್ಯ ಅನಿವಾರ್ಯ ಕಾಡುತ್ತಿದೆಯೇನೋ...
ಇವರೆಲ್ಲರೂ ನಮಗೆ ಸ್ವತಂತ್ರ್ಯ ಕೊಡಿಸಿ, ಗಣರಾಜ್ಯ ಮಾಡಿ
ಅದೆಷ್ಟು ವರ್ಷಗಳು ಗತಿಸಿದವೋ ಏನೋ
ಭಾರತದ ಜನಸಂಖ್ಯೆ ನೂರತ್ತು ಕೋಟಿಯಾಚೆ ನಡೆದಿದೆ
ಇನ್ನೂ ಹುಟ್ಟಿಲ್ಲ ಇಂಥ ಮಹನಿಯರೇಕೋ ?
ಹುಟ್ಟಿರಬಹುದೇನೋ... ಈ ನನ್ನ ಪಾಪಿ ಕಂಗಳಿಗೆ
ಇಂದಿಗೂ ಗೋಚರಿಸಿಲ್ಲ ನನ್ನೆಡೆಗೆ ಅವರದೆಂಥಾ ಮುನಿಸೋ......
ಶಿವು ಮೋರಿಗೇರಿ
ಏನೂ ಬರೆಯಲಾಗುತ್ತಿಲ್ಲ
ನನ್ನೊಳಗಿನ ಕೆಚ್ಚು ಕೊಚ್ಚಿತೆಲ್ಲಿಗೆ ?
ಸಾಲು ಲೇಖನಗಳಲ್ಲಿ ಸಿಕ್ಕಿಕೊಳ್ಳುತ್ತಿಲ್ಲ
ಸಂದೇಶಗಳಿಲ್ಲದೆ ಸುಸ್ತಾಗಿದೆಯಾ ಮನಸಿಗೆ ?
ಆಯ ತಪ್ಪುತ್ತಿವೆ ನಾಲಿಗೆಯಾಡುವ ಮಾತುಗಳೆಲ್ಲ
ನಲ್ಲೆ ಸರಿವಳಾ ಮುನಿಸಿಕೊಂಡು ಮರೆಗೆ ?
ಹರಿದ ಕನಸುಗಳಿಂದ ಆಚೆ ದಾರಿ ಕಾಣುತ್ತಿಲ್ಲ
ತುಂಬಾ ಭಯವಾಗುತ್ತಿದೆ ಯಾಕೋ ನನಗೆ
ಶಿವು ಮೋರಿಗೇರಿ
ಈ ಭೂಮಿಯಿಂದ ಒಂದೇ ಒಂದಿಂಚು
ಜಿಗಿದರೂ ಸಾಕು ತನುವೇ
ಆಗಸದಲ್ಲಾಗಲೆ ನೀ ಹೆಜ್ಜೆ ಇಟ್ಟಿರುತ್ತೀ
ಆದರೆ ಆ ಮಿಂಚು ತಾರೆಗಳನ್ನೇ ದಕ್ಕಿಸಿಕೊಳ್ಳಲು ಇಂಚಿಂಚು
ತಾರೆಗಳೆತ್ತರಕ್ಕೆ ಜಿಗಿದುಬಿಡು ಮನವೇ
ಆ ತಾರೆಗಳೊಳಗೊಂದು ನೀ ತಾರೆಯಾಗಿರುತ್ತೀ...
ಶಿವು ಮೋರಿಗೇರಿ
ನಿಜ ಹೇಳು ಸೂರ್ಯ,
ಅದೆಷ್ಟು ಹಸಿವೆಯಿಂದ ನಿದ್ರೆಯಿಲ್ಲದ
ನಿರ್ಗತಿಕರ ಕಂಡು ಮಲಗಿದೆ...?
ಉಡಲು ಬಟ್ಟೆಯಿಲ್ಲದೆ ಕೊರೆವ ಛಳಿಗೆ
ಅರೆನಗ್ನ ದೇಹಗಳ ದುಗುಡ ಕಂಡೆ ?
ನೀನು ಬರುವ ಹೊತ್ತಾಯಿತೆಂದು
ಎಷ್ಟು ಸೆರಗು ಸರಿಪಡಿಸಿಕೊಂಡ ಸೆಳವುಗಳ ಕಂಡೆ ?
ಅನ್ಯ ದಾರಿಯಿಲ್ಲ ಬದುಕಲೆಂದು ಒಳಗೊಳಗೆ ನೊಂದು
ಮತ್ತೆಷ್ಟು ನತದೃಷ್ಠ ಬೆತ್ತಲೆ ದೇಹಗಳ ಕಂಡೆ ?
ಮಾಡದ ಪಾಪಕ್ಕಾಗಿ ಯಾಮಾರಿದ ಘಳಿಗೆಗೆಂದು
ಹರಕೆಯ ಕುರಿಯಾದ ನಿರ್ಗತಿಕ ದೇಹಗಳ ಕಂಡೆ ?
ಇಷ್ಟೆಲ್ಲಾ ಕಂಡು ನಿನ್ನೊಳಗೆ ನೊಂದು ಉರಿದುರಿದು
ಮತ್ಯಾವ ಪುರುಷಾರ್ಥಕ್ಕೆ ಹುಟ್ಟಿದೆಯೋ ನೀ ಕೆಂಡದುಂಡೆ...
ಶಿವು ಮೋರಿಗೇರಿ
ಭೂಮಿಯಷ್ಟು ತಾಳ್ಮೆ ತಂದುಕೋ..........
ಆಕೆ ಹೇಳಿ ತಲೆಗೂದಲು ನೇವರಿಸಿ ಹೇಳಿದಳು
ಕ್ಷಣವೂ ಬಿಡುವಿಲ್ಲದೆ ತಿರುಗುವ ಭೂಮಿಗೆಲ್ಲಿಯ ತಾಳ್ಮೆ....?
ಹೇಳಬೇಕೆಂದರೆ ಮರಳಿ ಬರಲೇ ಇಲ್ಲ ಅವಳು..
ಶಿವು ಮೋರಿಗೇರಿ
ಏನೋ ಆಗಿದೆ ನಂಗೆ
ಭಾವನೆಗಳ ಸಾಗರ ಬರಿದಾಗಿ
ಪದ ಪುಂಜಗಳ ಬರ ಬಡಿದು
ಕಂಗಾಲಾಗಿದೆ ಮನವು ದಂಗಾಗಿ
ಕಣ್ತುಂಬಿ ನೋಟ ಕಲ್ಪನೆಯ ಮುಗಿಲೆಡೆಗೆ ನಡೆದು
ಆ ಸಂಭ್ರಮದ ಕವನಗಳು ಮರಳುವವಾ ಬಾಗಿ
ಭೋರ್ಗರೆತದ ಹುಚ್ಚು ಮಳೆ ಹುಚ್ಚೆದ್ದು ಕಾದು...?
ಅದ್ಯಾವಾಗ ಎದ್ದು ಹೋದಳೋ ನನ್ನ ಸ್ಪೂರ್ತಿ ದೇವತೆ
ಅದಾವ ನಿದ್ದೆಯಲ್ಲಿ ನನ್ನ ಅದ್ದಿ ಅದ್ದಿ
ಭಯದ ಕಾರ್ಗತ್ತಲು ಸರಿದು ಮಬ್ಬು ಹರಿದರಿದು
ಮರಳಿಬಿಡಲಿ ಈ ಖಾಲಿ ಮನದಲ್ಲಿ ಕೊಳೆಯುತ್ತಿದೆ ರದ್ದಿ.....
ಶಿವು ಮೋರಿಗೇರಿ
ನಂಗೆ ಯಾವತ್ತೋ ಗೊತ್ತಾಗಿ ಹೋಗಿದೆ
ಎಲ್ಲರೂ ಒಂದಿನ ಸತ್ತೇ ಸಾಯ್ತಾರೆ ಅಂತ
ಮನಸ್ಸು ಯಾಕೋ ಕಲ್ಲಾಗಿ ಕುಳಿತಿದೆ
ಜೀವನವನ್ನೊಮ್ಮೆ ಅನುಭವಿಸೋ ಅಂತ
ಶಿವು ಮೋರಿಗೇರಿ
ಹಾಸಿಕೊಳ್ಳೋಕೆ ಬಿ.ಪಿ...
ಹೊದ್ದುಕೊಳ್ಳೋಕೆ ಶುಗರ್...
ತಲೆದಿಂಬಿಗೆ ಕ್ಯಾನ್ಸರ್...
ಮಗ್ಗುಲಲ್ಲಿ ಹೆಚ್.ಐ.ವಿ....
ಇರಲಿಲ್ಲವೆಂದರೆ ನಿದ್ರೆ ಬರೊಲ್ಲ ಎನ್ನುವವನಿಗೆ
ಏನ ಹೇಳಲಿ ನಾನು....?
ಶಿವು ಮೋರಿಗೇರಿ
ಹಸಿವೇ ಇಲ್ಲದ ದೇವರು ನನ್ನವನು...
ಭೂರಿ ಪ್ರಸಾದಗಳನ್ನು ಅರ್ಪಿಸುತ್ತಿದ್ದೇನೆ ನಾನು...
ಬಾಯಾರಿಕೆಯೇ ಗೊತ್ತಿಲ್ಲದ ಕರುಣಾಮಯಿ ಅವನು...
ಅವನೆಸರಲಿ ತೀರ್ಥ ಹಂಚಿದ್ದೇ ಹಂಚಿದ್ದು ನಾನು..
ಕಲ್ಮಶವೇ ಇಲ್ಲದ ಕನಕ ಮೂರ್ತಿ ಅವನು..
ಅಭಿಷೇಕವೆಂಬ ಮಜ್ಜನ ಮಾಡುವೆನು ಅವನಿಗಾಗಿ ನಾನು..
ಲೋಕಕ್ಕೆ ಬೆಳಕು ನೀಡುವವನು ಅವನು..
ನಿನಗೇ ಮಂಗಳಾರಾತಿ ಬೆಳಕ ತೋರಿಸುವೆನಲ್ಲಾ ನಾನು
ಸಕಲವನ್ನೂ ತ್ಯಜಿಸಿದ ಪುಣ್ಯಾತ್ಮ ನೀನು
ಸಕಲವನ್ನೂ ನಿನ್ನೆದಿರು ಸಾದರಪಡಿಸುವೆನಲ್ಲಾ ನಾನು
ನಿನ್ನೊಳಗೆ ನಿನ್ನ ಕಾಯಕದೊಳಗಿರುವೆನೆಂದವನು ನೀನು
ಮರೆತು ನಿನಗಾಗಿ ಒಂದು ಗೋಪುರದ ಮನೆ ಕಟ್ಟಬಯಸುವ ಹುಂಬ ನಾನು
ಬಡವರ ಗೊಳಿಗೆ ಕಿವಿ ಮುಚ್ಚಿಕೊಂಡಿರುವೆ ನಾಣು
ಕೊನೆಗೆ ನನಗೆ ಬುದ್ಧಿ ಕಲಿಸಬೇಕಿರುವವನು ನೀನು
ಶಿವು ಮೋರಿಗೇರಿ
ಬೇಕಿದ್ದರೆ ಪರೀಕ್ಷಿಸಿ ನೋಡಿ,,,
"ಪ್ರಥಮ ಚಿಕಿತ್ಸಾ ಪೆಟ್ಟಿಗೆ" ಇರುವ
ಒಂದೇ ಒಂದು ಗ್ಯಾರೆಜ್
ಇಡೀ ರಾಜ್ಯದಲ್ಲಿ ಹುಡುಕಿದರೂ
ಒಂದೂ ಸಿಗಲಿಕ್ಕಿಲ್ಲವೇನೋ...
ಶಿವು ಮೋರಿಗೇರಿ
ಇಲ್ಲಿ ಕನಸು ಖಾಲಿಯಾಗಿ ಆಗಸದ ತಾರೆಗಳಾಗಿಬಿಟ್ಟವು ...
ನಿನ್ನ ಕೋಪವಲ್ಲಿ ಮೋಡವಾಗಿ ಅಡ್ಡಿಪಡಿಸಿದ್ದು ಸರಿಯೇ.....
ನನ್ನ ಕಲ್ಪನೆಗಳೆಲ್ಲ ಕೈ ಕೊಟ್ಟು ಕುಳಿತುಬಿಟ್ಟವು
ನನ್ನ ಕವನಗಳಿಗೆ ನೀ ಚುಂಬಿಸಿದ್ದು ಸರಿಯೇ.......
ಶಿವು ಮೋರಿಗೇರಿ
ಸೌಂದರ್ಯ ಅನ್ನೋದು, ಬಣ್ಣದಲ್ಲಿಲ್ಲ,
ದೈಹಿಕವಾಗಿಲ್ಲ ಅಂತ....
ನಾವೆಂಥವರನ್ನು ಮದ್ವೆಯಾಗೋದು,,,
ನಮ್ಮ ಮಕ್ಕಳಿಗೆ ಎಂಥಹ ಜೋಡಿ ಹುಡುಕುತ್ತೀವಿ
ಅಂತ ಮರ್ತೇಬಿಡ್ತೀವಿ ಅಲ್ವಾ.....?
ಶಿವು ಮೋರಿಗೇರಿ
ಬಾಲ್ಯದಲ್ಲಿ ಕ್ರೋಧವನ್ನು
ಯೌವ್ವನದಲ್ಲಿ ಕಾಮವನ್ನು
ಮುಪ್ಪಿನಲ್ಲಿ ಮತ್ಸರವನ್ನು
ಗೆಲ್ಲೋ ನೋಡೋಣ...
ಶಿವು ಮೋರಿಗೇರಿ
"ಜಗತ್ತಿನ ಎಲ್ಲಾ ಶ್ರೇಷ್ಠರು ಹಿಂದೆದೋ ಒಂದು ದಿನ ಯಾವುದೋ ಒಬ್ಬ ಮೇಷ್ಟ್ರ ಮುಂದೆ ಚಕ್ಕಳ ಬಡಿದು ಕುಳಿತ ಪೆದ್ದು ವಿದ್ಯಾರ್ಥಿಯೇ " ಮುಂದೆ ಅವರು ಶ್ರೇಷ್ಠರಾಗ್ತಾರೆ, ಅದಕ್ಕೆ ಹೇಳೋದು ತಸ್ಮೈ ಶ್ರೀ ಗುರುವೇ ನಮಃ..... .ಶಿವು ಮೋರಿಗೇರಿ
ಯಾವ ನಿರೀಕ್ಷೆಯೂ ಇಲ್ಲದ ಪ್ರೀತಿ
ಯಾವ ಫಲವೂ ಬೇಡದ ಸಲುಗೆ
ಯಾವ ಕಲ್ಮಷವೂ ಇಲ್ಲದ ಅಪ್ಪುಗೆ
ಯಾವ ಮೋಸವೂ ಬಗೆಯದ ಸ್ನೇಹ
ಯಾವ ಯಾವ ಹೃದಯಗಳಲ್ಲಡಗಿವೆಯೋ ತೆಪ್ಪಗೆ
ಶಿವು ಮೋರಿಗೇರಿ
ಗಡಿಗಳೇ ಇಲ್ಲದ ಧರೆಯನು ಕಂಡು
ಬೆಚ್ಚಿಬೀಳದ ದೊರೆಗಳು ಯಾರು ?
ಮನ ಮನಗಳ ನಡುವೆಯೇ ಗೋಡೆಗಳ ಕಂಡು
ಮರುಗುವವರ ನೋವಿನ ಮಾತು ಕೇಳುವವರಾರು ?
ಶಿವು ಮೋರಿಗೇರಿ
ದೇವರ ಹರಸಿ ಗುಡಿಯೊಳಗೋದರೆ
ದೇವರ ಮೂರ್ತಿಯೊಳಗೂ ನೀನೆ
ಭಕ್ತಿಯಿಂದ ಘಂಟೆಯ ಹೊಡೆದರೆ
ಘಂಟೆಯಿಂದ ಹೊರಹೊಮ್ಮಿದ ನಾದವು ನೀನೆ
ಶಿವು ಮೋರಿಗೇರಿ
ಅರ್ಧನಾರೀಶ್ವರನನ್ನು ನಾವು ಗೌರವಿಸ್ತಿವಿ
ಮೋಹಿನಿಯಾದ ಹರಿಯನ್ನು ನಾವು ಗೌರವಿಸ್ತಿವಿ
ಮಹಾಭಾರತಕ್ಕೊಬ್ಬ ಬೃಹನ್ನಳೆಯನ್ನೂ ತಂದಿದಿವಿ
ಪ್ರಸ್ತುತ ಇಂಥಹವರನ್ನು ಸಮಾಜದ ಅಪಶಕುನದಂತೆ ಕಾಣ್ತಿವಿ
ನಿಜಕ್ಕೂ ನಾವೆಂಥಾ ಬ್ರಮೆಯಲ್ಲಿ ಬದುಕ್ತಾ ಇದೀವಿ ?
ಶಿವು ಮೋರಿಗೇರಿ
ಕಲ್ಪಿತ ಭಾವನೆಗಳೇ ಮಿಡಿತವಾಗಿದ್ದ
ಪ್ರೀತಿಯ ತುಡಿತಗಳೇ ಬರಹಗಳಾಗಿದ್ದ
ಬಂಗಾರದ ದಿನಗಳು ಕಳೆದು ಹೋದವು ಯಾಕೋ ?
ಸುಂದರ ಹೂಗಳ ಹೂದೋಟವಾಗಿದ್ದ
ಅದ್ಭುತ ವರ್ಣನೆಗಳ ತವರಾಗಿದ್ದ
ನನ್ನ ಮನವು ಖಾಲಿಯಾಗಿ ಕಮರಿ ನಿಂತದ್ದು ಯಾಕೋ ?
ಶಿವು ಮೋರಿಗೇರಿ
ಹನ್ಮಪ್ಪನ ಗುಡ್ಯಾಗ ನಮಾಜ್ ಮಾಡ್ತಾರೇನ್ರಿ ?
ಮಸೀದ್ಯಾಗ ಯಾವ ಅಭಿಷೇಕ ನಡಿತೈತೇಳ್ರೀ ?
ಬಚ್ಚಲ ಮನ್ಯಾಗ ಭಕ್ತಿ ಹುಟ್ಟುತೈತೇನ್ರಿ ?
ಸಣ್ಣ ಕೂಸು ನನ್ನ ಈ ಪ್ರಶ್ನಿ ಕೇಳಕತ್ಯಾಳ್ರೀ ...
ಶಿವು ಮೋರಿಗೇರಿ
ಮಳಿ ಇಲ್ಲಾ ಬೆಳಿ ಇಲ್ಲ
ನಮ್ಮನ್ನಾಳ ಸರ್ಕಾರಕ್ಕಿನ್ನು ಥಂಡಿ ಬಿಟ್ಟಿಲ್ಲ
ನನ್ನಂಥ ಬಡವನಿಗ್ಯ ಅಕ್ಕಿ ಕಾರ್ಡು ಇಲ್ಲ
ರಾಜ್ಯದ ಪರಿಸ್ಥಿತಿ ಎಂಗೈತೋ ಗೊತ್ತ ಆಗಂಗಿಲ್ಲ
ಪೇಪರ್ ತೆಗದು ನೋಡಾಕ ಮನಸಾ ಬರ್ತಿಲ್ಲ
ಅಂಗಂತ ಎದಿಮ್ಯಾಗ ಬಂದಿರಾ ಎಲೆಕ್ಷನ್ನೂ ಮರಿಯಂಗಿಲ್ಲ
ಎಷ್ಟಾ ಆಗ್ಲಿ ನಾನು ಇದ್ಯಾವಂತ ಅದೀನಲ್ಲ ?
ಯಾರಿಗ್ಯ ಓಟು ಆಕಬೇಕೋ ತಲಿಗ್ಯ ಅತ್ತಂಗಿಲ್ಲ
ಈಗಿನ ಟೈಂನಾಗ ನನಿಗ್ಯಾರೂ ಒಳ್ಳೇರು ಅನ್ನಿಸ್ತಾನೇ ಇಲ್ಲ
ಕರದು ಬುದ್ಧಿ ಹೇಳಾರು ನನಿಗೆ ಕಾಣಿಸ್ತಾನೇ ಇಲ್ಲ
ಶಿವು ಮೋರಿಗೇರಿ
ನಮಗೆ ಈಗ ಇನ್ನೊಬ್ಬ ಗಾಂಧಿ
ಮತ್ತೊಬ್ಬ ಭಗತ್, ವಿವೇಕಾನಂದ
ಭೋಸ್, ಬಸವ, ಬುದ್ಧ, ಘರ್ಜಿಸಿದ ಆ ಮೈಸೂರ ಹುಲಿ ಟಿಪ್ಪು
ಕಿತ್ತೂರ ಒಡತಿ ಚೆನ್ನಮ್ಮ ವೀರ ವನಿತೆ ಓಬವ್ವ
ಬಿ.ಆರ್.ಅಂಬೇಡ್ಕರ್ ಇನ್ನೂ ಯಾರ್ಯಾರೋ ಬೇಕಿದೆ
ಅಂಥ ಮಹನೀಯರ ಅಗತ್ಯ ಅನಿವಾರ್ಯ ಕಾಡುತ್ತಿದೆಯೇನೋ...
ಇವರೆಲ್ಲರೂ ನಮಗೆ ಸ್ವತಂತ್ರ್ಯ ಕೊಡಿಸಿ, ಗಣರಾಜ್ಯ ಮಾಡಿ
ಅದೆಷ್ಟು ವರ್ಷಗಳು ಗತಿಸಿದವೋ ಏನೋ
ಭಾರತದ ಜನಸಂಖ್ಯೆ ನೂರತ್ತು ಕೋಟಿಯಾಚೆ ನಡೆದಿದೆ
ಇನ್ನೂ ಹುಟ್ಟಿಲ್ಲ ಇಂಥ ಮಹನಿಯರೇಕೋ ?
ಹುಟ್ಟಿರಬಹುದೇನೋ... ಈ ನನ್ನ ಪಾಪಿ ಕಂಗಳಿಗೆ
ಇಂದಿಗೂ ಗೋಚರಿಸಿಲ್ಲ ನನ್ನೆಡೆಗೆ ಅವರದೆಂಥಾ ಮುನಿಸೋ......
ಶಿವು ಮೋರಿಗೇರಿ
ಏನೂ ಬರೆಯಲಾಗುತ್ತಿಲ್ಲ
ನನ್ನೊಳಗಿನ ಕೆಚ್ಚು ಕೊಚ್ಚಿತೆಲ್ಲಿಗೆ ?
ಸಾಲು ಲೇಖನಗಳಲ್ಲಿ ಸಿಕ್ಕಿಕೊಳ್ಳುತ್ತಿಲ್ಲ
ಸಂದೇಶಗಳಿಲ್ಲದೆ ಸುಸ್ತಾಗಿದೆಯಾ ಮನಸಿಗೆ ?
ಆಯ ತಪ್ಪುತ್ತಿವೆ ನಾಲಿಗೆಯಾಡುವ ಮಾತುಗಳೆಲ್ಲ
ನಲ್ಲೆ ಸರಿವಳಾ ಮುನಿಸಿಕೊಂಡು ಮರೆಗೆ ?
ಹರಿದ ಕನಸುಗಳಿಂದ ಆಚೆ ದಾರಿ ಕಾಣುತ್ತಿಲ್ಲ
ತುಂಬಾ ಭಯವಾಗುತ್ತಿದೆ ಯಾಕೋ ನನಗೆ
ಶಿವು ಮೋರಿಗೇರಿ
ಈ ಭೂಮಿಯಿಂದ ಒಂದೇ ಒಂದಿಂಚು
ಜಿಗಿದರೂ ಸಾಕು ತನುವೇ
ಆಗಸದಲ್ಲಾಗಲೆ ನೀ ಹೆಜ್ಜೆ ಇಟ್ಟಿರುತ್ತೀ
ಆದರೆ ಆ ಮಿಂಚು ತಾರೆಗಳನ್ನೇ ದಕ್ಕಿಸಿಕೊಳ್ಳಲು ಇಂಚಿಂಚು
ತಾರೆಗಳೆತ್ತರಕ್ಕೆ ಜಿಗಿದುಬಿಡು ಮನವೇ
ಆ ತಾರೆಗಳೊಳಗೊಂದು ನೀ ತಾರೆಯಾಗಿರುತ್ತೀ...
ಶಿವು ಮೋರಿಗೇರಿ
ನಿಜ ಹೇಳು ಸೂರ್ಯ,
ಅದೆಷ್ಟು ಹಸಿವೆಯಿಂದ ನಿದ್ರೆಯಿಲ್ಲದ
ನಿರ್ಗತಿಕರ ಕಂಡು ಮಲಗಿದೆ...?
ಉಡಲು ಬಟ್ಟೆಯಿಲ್ಲದೆ ಕೊರೆವ ಛಳಿಗೆ
ಅರೆನಗ್ನ ದೇಹಗಳ ದುಗುಡ ಕಂಡೆ ?
ನೀನು ಬರುವ ಹೊತ್ತಾಯಿತೆಂದು
ಎಷ್ಟು ಸೆರಗು ಸರಿಪಡಿಸಿಕೊಂಡ ಸೆಳವುಗಳ ಕಂಡೆ ?
ಅನ್ಯ ದಾರಿಯಿಲ್ಲ ಬದುಕಲೆಂದು ಒಳಗೊಳಗೆ ನೊಂದು
ಮತ್ತೆಷ್ಟು ನತದೃಷ್ಠ ಬೆತ್ತಲೆ ದೇಹಗಳ ಕಂಡೆ ?
ಮಾಡದ ಪಾಪಕ್ಕಾಗಿ ಯಾಮಾರಿದ ಘಳಿಗೆಗೆಂದು
ಹರಕೆಯ ಕುರಿಯಾದ ನಿರ್ಗತಿಕ ದೇಹಗಳ ಕಂಡೆ ?
ಇಷ್ಟೆಲ್ಲಾ ಕಂಡು ನಿನ್ನೊಳಗೆ ನೊಂದು ಉರಿದುರಿದು
ಮತ್ಯಾವ ಪುರುಷಾರ್ಥಕ್ಕೆ ಹುಟ್ಟಿದೆಯೋ ನೀ ಕೆಂಡದುಂಡೆ...
ಶಿವು ಮೋರಿಗೇರಿ
ಭೂಮಿಯಷ್ಟು ತಾಳ್ಮೆ ತಂದುಕೋ..........
ಆಕೆ ಹೇಳಿ ತಲೆಗೂದಲು ನೇವರಿಸಿ ಹೇಳಿದಳು
ಕ್ಷಣವೂ ಬಿಡುವಿಲ್ಲದೆ ತಿರುಗುವ ಭೂಮಿಗೆಲ್ಲಿಯ ತಾಳ್ಮೆ....?
ಹೇಳಬೇಕೆಂದರೆ ಮರಳಿ ಬರಲೇ ಇಲ್ಲ ಅವಳು..
ಶಿವು ಮೋರಿಗೇರಿ
ಏನೋ ಆಗಿದೆ ನಂಗೆ
ಭಾವನೆಗಳ ಸಾಗರ ಬರಿದಾಗಿ
ಪದ ಪುಂಜಗಳ ಬರ ಬಡಿದು
ಕಂಗಾಲಾಗಿದೆ ಮನವು ದಂಗಾಗಿ
ಕಣ್ತುಂಬಿ ನೋಟ ಕಲ್ಪನೆಯ ಮುಗಿಲೆಡೆಗೆ ನಡೆದು
ಆ ಸಂಭ್ರಮದ ಕವನಗಳು ಮರಳುವವಾ ಬಾಗಿ
ಭೋರ್ಗರೆತದ ಹುಚ್ಚು ಮಳೆ ಹುಚ್ಚೆದ್ದು ಕಾದು...?
ಅದ್ಯಾವಾಗ ಎದ್ದು ಹೋದಳೋ ನನ್ನ ಸ್ಪೂರ್ತಿ ದೇವತೆ
ಅದಾವ ನಿದ್ದೆಯಲ್ಲಿ ನನ್ನ ಅದ್ದಿ ಅದ್ದಿ
ಭಯದ ಕಾರ್ಗತ್ತಲು ಸರಿದು ಮಬ್ಬು ಹರಿದರಿದು
ಮರಳಿಬಿಡಲಿ ಈ ಖಾಲಿ ಮನದಲ್ಲಿ ಕೊಳೆಯುತ್ತಿದೆ ರದ್ದಿ.....
ಶಿವು ಮೋರಿಗೇರಿ
ನಂಗೆ ಯಾವತ್ತೋ ಗೊತ್ತಾಗಿ ಹೋಗಿದೆ
ಎಲ್ಲರೂ ಒಂದಿನ ಸತ್ತೇ ಸಾಯ್ತಾರೆ ಅಂತ
ಮನಸ್ಸು ಯಾಕೋ ಕಲ್ಲಾಗಿ ಕುಳಿತಿದೆ
ಜೀವನವನ್ನೊಮ್ಮೆ ಅನುಭವಿಸೋ ಅಂತ
ಶಿವು ಮೋರಿಗೇರಿ
ಹಾಸಿಕೊಳ್ಳೋಕೆ ಬಿ.ಪಿ...
ಹೊದ್ದುಕೊಳ್ಳೋಕೆ ಶುಗರ್...
ತಲೆದಿಂಬಿಗೆ ಕ್ಯಾನ್ಸರ್...
ಮಗ್ಗುಲಲ್ಲಿ ಹೆಚ್.ಐ.ವಿ....
ಇರಲಿಲ್ಲವೆಂದರೆ ನಿದ್ರೆ ಬರೊಲ್ಲ ಎನ್ನುವವನಿಗೆ
ಏನ ಹೇಳಲಿ ನಾನು....?
ಶಿವು ಮೋರಿಗೇರಿ
ಹಸಿವೇ ಇಲ್ಲದ ದೇವರು ನನ್ನವನು...
ಭೂರಿ ಪ್ರಸಾದಗಳನ್ನು ಅರ್ಪಿಸುತ್ತಿದ್ದೇನೆ ನಾನು...
ಬಾಯಾರಿಕೆಯೇ ಗೊತ್ತಿಲ್ಲದ ಕರುಣಾಮಯಿ ಅವನು...
ಅವನೆಸರಲಿ ತೀರ್ಥ ಹಂಚಿದ್ದೇ ಹಂಚಿದ್ದು ನಾನು..
ಕಲ್ಮಶವೇ ಇಲ್ಲದ ಕನಕ ಮೂರ್ತಿ ಅವನು..
ಅಭಿಷೇಕವೆಂಬ ಮಜ್ಜನ ಮಾಡುವೆನು ಅವನಿಗಾಗಿ ನಾನು..
ಲೋಕಕ್ಕೆ ಬೆಳಕು ನೀಡುವವನು ಅವನು..
ನಿನಗೇ ಮಂಗಳಾರಾತಿ ಬೆಳಕ ತೋರಿಸುವೆನಲ್ಲಾ ನಾನು
ಸಕಲವನ್ನೂ ತ್ಯಜಿಸಿದ ಪುಣ್ಯಾತ್ಮ ನೀನು
ಸಕಲವನ್ನೂ ನಿನ್ನೆದಿರು ಸಾದರಪಡಿಸುವೆನಲ್ಲಾ ನಾನು
ನಿನ್ನೊಳಗೆ ನಿನ್ನ ಕಾಯಕದೊಳಗಿರುವೆನೆಂದವನು ನೀನು
ಮರೆತು ನಿನಗಾಗಿ ಒಂದು ಗೋಪುರದ ಮನೆ ಕಟ್ಟಬಯಸುವ ಹುಂಬ ನಾನು
ಬಡವರ ಗೊಳಿಗೆ ಕಿವಿ ಮುಚ್ಚಿಕೊಂಡಿರುವೆ ನಾಣು
ಕೊನೆಗೆ ನನಗೆ ಬುದ್ಧಿ ಕಲಿಸಬೇಕಿರುವವನು ನೀನು
ಶಿವು ಮೋರಿಗೇರಿ
ಬೇಕಿದ್ದರೆ ಪರೀಕ್ಷಿಸಿ ನೋಡಿ,,,
"ಪ್ರಥಮ ಚಿಕಿತ್ಸಾ ಪೆಟ್ಟಿಗೆ" ಇರುವ
ಒಂದೇ ಒಂದು ಗ್ಯಾರೆಜ್
ಇಡೀ ರಾಜ್ಯದಲ್ಲಿ ಹುಡುಕಿದರೂ
ಒಂದೂ ಸಿಗಲಿಕ್ಕಿಲ್ಲವೇನೋ...
ಶಿವು ಮೋರಿಗೇರಿ
ಇಲ್ಲಿ ಕನಸು ಖಾಲಿಯಾಗಿ ಆಗಸದ ತಾರೆಗಳಾಗಿಬಿಟ್ಟವು ...
ನಿನ್ನ ಕೋಪವಲ್ಲಿ ಮೋಡವಾಗಿ ಅಡ್ಡಿಪಡಿಸಿದ್ದು ಸರಿಯೇ.....
ನನ್ನ ಕಲ್ಪನೆಗಳೆಲ್ಲ ಕೈ ಕೊಟ್ಟು ಕುಳಿತುಬಿಟ್ಟವು
ನನ್ನ ಕವನಗಳಿಗೆ ನೀ ಚುಂಬಿಸಿದ್ದು ಸರಿಯೇ.......
ಶಿವು ಮೋರಿಗೇರಿ
ಸೌಂದರ್ಯ ಅನ್ನೋದು, ಬಣ್ಣದಲ್ಲಿಲ್ಲ,
ದೈಹಿಕವಾಗಿಲ್ಲ ಅಂತ....
ನಾವೆಂಥವರನ್ನು ಮದ್ವೆಯಾಗೋದು,,,
ನಮ್ಮ ಮಕ್ಕಳಿಗೆ ಎಂಥಹ ಜೋಡಿ ಹುಡುಕುತ್ತೀವಿ
ಅಂತ ಮರ್ತೇಬಿಡ್ತೀವಿ ಅಲ್ವಾ.....?
ಶಿವು ಮೋರಿಗೇರಿ
No comments:
Post a Comment