ಕನಸಿನ ಸಮಾಜ
ಅವನೊಬ್ಬ ವಿಚಿತ್ರ ವ್ಯಕ್ತಿ. ವಯಸ್ಸು ಇಷ್ಟೇ ಇರಬೇಕೆಂದು ಬಲ್ಲವರಿಲ್ಲ. ಸುಕ್ಕು ಸುಕ್ಕಾಗಿ ಹಸಿರು ಪಾಚಿಯಂತೆ ಬೆಳೆದ ತಲೆಗೂದಲಿಗೆ ನುರಿತ ಕ್ಷೌರಿಕನ ಮೊನಚು ಕತ್ತರಿಯೂ ಭಯಬೀಳುತ್ತಿತ್ತು. ಢಾಳು ಮಣ್ಣು ಮೆತ್ತಿದ್ದ ಕಪ್ಪಾತಿ ಕಪ್ಪು ವರ್ಣದ ಮುದುಡಿದ ಚರ್ಮದ ಮೇಲೆ ರಾಗಿ ಕಾಳನ್ನು ಎಸೆದು ಒಂದಷ್ಟು ನೀರು ಚೆಲ್ಲಿಬಿಟ್ಟರೆ ನಾಲ್ಕಾರು ದಿನಗಳಲ್ಲಿ ಮೊಳಕೆ ಗ್ಯಾರೆಂಟಿ. ಇಷ್ಟಗಲ ಕಿವಿಗಳ ಮೇಲೆ ಮೂರಿಂಚು ಉದ್ದದ ಬೆಳ್ಳಿ ಪೊದೆಗೂದಲು ಸುರುಳಿ ಸುತ್ತಿಕೊಂಡಿದ್ದವು. ನೆರೆತ ಹುಬ್ಬುಗಳ ಕೆಳಗೆ ಜೋತುಬಿದ್ದ ಅಮಲು ಕಣ್ಣುಗಳಲ್ಲಿ ಈ ಲೋಕವನ್ನು ನಾ ಬಲ್ಲೆ ಎಂಬ ಅರ್ಧ ಚಂದ್ರ ಇಣುಕುತ್ತಿತ್ತು. ನೀಳ ಮೂಗಿನ ಹೊಳ್ಳೆಯಿಂದ ಒಮ್ಮೆ ಉಸಿರು ಹೊರ ಬಂದರೆ ಆ ಮೂಗ ಕೆಳಗಿನ ಗಾಢ ಮೀಸೆಯ ಕೆಲವು ಕೂದಲುಗಳು ಕುಣಿದು ಕುಳಿತುಕೊಳ್ಳುತ್ತಿದ್ದವು. ಇನ್ನು ಆ ದಪ್ಪ ದಪ್ಪ ಮೀಸೆ ಬೆಳೆದು ಕಪ್ಪು ಮೇಲ್ದುಟಿಯ ಗಡಿದಾಟಿ ಕೆಳದುಟಿಯ ಹೆಬ್ಬಂಡೆ ಮೇಲೆ ಮೈಬಿಚ್ಚಿ ಮಲಗಿದಂತಿದ್ದವು. ಮಖದ ತುಂಬಾ ಗಡತ್ತಾಗಿ ಬೆಳೆದಿದ್ದ ಗಡ್ಡದ ಸೊಕ್ಕು, ತಾತನ ಮುದುಡಿದ ಎತ್ತರದ ಕತ್ತನ್ನೂ ಮುಚ್ಚಿಕೊಂಡು ಎದೆಯ ಮಧ್ಯದ ಗರಿಕೆ ಕೂದಲಿಗೆ ಮುತ್ತಿಡುತ್ತಿದ್ದವು.
ಆರಡಿ ಎತ್ತರದ ಗರಡಿಯಲ್ಲಿ ಪಳಗಿದ ದೇಹಕ್ಕೆ ಮುಂಗೈಗಪ್ಪಿನ ಉದ್ದುದ್ದ ಬಿದ್ದಿದ್ದ ಜುಬ್ಬದ ಮೇಲೆ ಜಗತ್ತಿನ ಸಕಲ ತ್ಯಾಜ್ಯದ ಕಲೆಗಳು ಮೇಳೈಸಿದ್ದವು. ಅವನು ತೊಟ್ಟುಕೊಂಡಿದ್ದ ಪಂಜೆಯೊಳಗೆ ಅದೆಷ್ಟು ಕೂರಿಗಳಿದ್ದವೋ ಭಗವಂತ ಅಂತ ಇದ್ರೆ ಅವನೇ ಬಲ್ಲ. ಈ ತಾತನ ಕೈಕಾಲುಗಳಲ್ಲಿ ಬೆಳೆದ ಎರಡಿಂಚು ಉದ್ದದ ಕಪ್ಪು ಉಗುರುಗಳನ್ನು ನೋಡಿದ್ದರೆ ಆ ಅಂಗುಲಿ ಮಾಲ ಇವನ ಇಪ್ಪತ್ತು ಉಗುರುಗಳಿಂದ ಮೈತುಂಬಿಕೊಳ್ಳುವಂಥಹ ಸರವನ್ನೇ ಹಾಕಿಕೊಳ್ಳಬಹುದಿತ್ತು. ಇಂಥಹ ಸಕಲ ವಾಕರಿಕೆಯ ಮೇರು ವ್ಯಕ್ತಿಯ ಪಕ್ಕದಲ್ಲಿ ಒಂದು ನಜ್ಜುಗುಜ್ಜಾದ ಸಿಲ್ವರ್ ತಟ್ಟೆ, ಒಂದು ಆಧುನಿಕ ಯುಗದ ಮಗ್ ಮತ್ತೊಂದು ಹಳೇ ಕಾಲದ ಕಂಚಿನ ಲೋಟಗಳು ತಮಗಿಷ್ಟಬಂದಂತೆ ಬಿದ್ದಿರುತ್ತಿದ್ದವು. ತಾತನ ಉದ್ದುದ್ದ ಜುಬ್ಬದ ಒಂದು ಬಕ್ಕಣದಲ್ಲಿ ಒಂದು ಚಿಲುಮೆ, ಮತ್ತೊಂದು ಜೇಬಲ್ಲಿ ಒಂದು ಪ್ಲಾಸ್ಟಿಕ್ ಕವರ್ನಲ್ಲಿ ಮೂರು ಮೈಲಿ ಘಂಗುಡುವ ಹೊಗೆಸೊಪ್ಪು ನಗು ಚೆಲ್ಲುತ್ತಿತ್ತು. ಈ ತಾತನಿಗೆ ವಿಶೇಷವಾಗಿ ಮನೆಯೇನೂ ಇರಲಿಲ್ಲ, ಅವನ ಒಂದು ಏರಿಯಾದಲ್ಲಿ ಒಂದು ಹರಟೆ ಕಟ್ಟೆಯ ಮರದ ಬುಡದಲ್ಲಿ ಆ ಮರಕ್ಕೆ ಬೆನ್ನುಕೊಟ್ಟು ತಗ್ಗಿಸಿದ ಹಣೆಗೆ ತನ್ನ ಒಂದು ಕೈಯನ್ನು ಆಸರೆ ಕೊಟ್ಟು ಸದಾ ಯಾವುದೋ ಬ್ರಾಂತುವಿನಲ್ಲಿ ಮುಳುಗಿರುತ್ತಿದ್ದವನಿಗೆ ಆ ಏರಿಯಾದಲ್ಲಿ ಮೊದಲು ಯಾರ ಮನೆಯಲ್ಲಿ ಬಿಸಿಯೂಟವಾದರೂ ಸರಿಯೇ ಮೊದಲು ಈ ತಾತನ ತಟ್ಟೆಗೆ ಪ್ರಸಾದದ ರೂಪದಲ್ಲಿ ಬಂದು ಇವನ ಹಸಿವಿಗೆ ತೇಪೆ ಹಾಕುತ್ತಿತು.
ಇಂಥಹ ಅಜ್ಜನ ಸುತ್ತು ಏಳೆಂಟು ನಾಯಿಗಳು ತನ್ನ ನಡುವಿನಲ್ಲಿ ತನ್ನ ಮುಖಗಳನ್ನು ಮುಚ್ಚಿಕೊಂಡು ಮಲಗಿರುತ್ತಿದ್ದವು. ವಿಚಿತ್ರ ಅಂದ್ರೆ, ಸ್ವಲ್ಪ ದೃಷ್ಟಿ ದೋಷ ಪಡೆದಿದ್ದ ತಾತನ ತಟ್ಟೆಯಲ್ಲಿ ಅದೆಷ್ಟೇ ಆಹಾರವಿದ್ದರೂ ತಾತ ತಿಂದು ಉಳಿಸುವವರೆಗೂ ಅಲ್ಲಿಯ ಯಾವ ನಾಯಿಗಳು ದುಡುಕಿ ತಟ್ಟೆಗೆ ಬಾಯಿ ಹಾಕಿದ್ದನ್ನು ಇದುವರೆಗೂ ಯಾರೂ ನೋಡಿರಲಿಲ್ಲ. ಮತ್ತು ಆ ನಾಯಿಗಳು ಯಾವುದೇ ಸಂದರ್ಭದಲ್ಲೂ ಈ ತಾತನನ್ನು ಅಗಲಿ ಆಚೆ ಹೋದದ್ದನ್ನೂ ಕಂಡವರಿಲ್ಲ. ಯಾವಾಗಲೂ ಮಂಪರಿನಲ್ಲೇ ಇದ್ದಂತೆ ಕಾಣುತ್ತಿದ್ದನ ತಾತನ ಚೈತನ್ಯವೇ ಆ ಚಿಲುಮೆ. ತನಗೆ ಬೇಸರವಾದಾಗಲೆಲ್ಲಾ ಒಂದಷ್ಟು ಹೊಗೆಸೊಪ್ಪನ್ನು ಚಿಲುಮೆ ಜಠರಕ್ಕೆ ತುಂಬಿ ಶಿವ ಎನ್ನುತ್ತಾ ಕಡ್ಡಿಗೀರಿ ಎರಡು ಜುರುಮೆ ಜೋರಾಗಿ ಹೊಗೆ ಕುಡಿದನೆಂದರೆ ತಾತನ ಕಪ್ಪು ಗಲ್ಲದ ಮೇಲೆ ಕೆಂಡ ಕನಲುತಿತ್ತು. ವಿಪರೀತ ಹೊಗೆಸೊಪ್ಪು ಸೇದುವುದರ ಜೊತೆಗೆ ಹಲ್ಲುಗಳನ್ನು ಉಜ್ಜದೇ ಇದ್ದ ತಾತನ ಹಲ್ಲುಗಳು ಉಣಸೆ ಬೀಜದ ಬಣ್ಣಕ್ಕೆ ಸೆಡ್ಡು ಹೊಡೆದಿದ್ದವು. ಸ್ವಾದವನ್ನು ಕಳೆದುಕೊಂಡಂತಿದ್ದ ನಾಲಿಗೆಗೆ ಹಸಿರ ಹಾವನ್ನೂ ಅಣಕಿಸುವ ದೈರ್ಯವಿತ್ತು. ಇಷ್ಟೆಲ್ಲಾ 'ಗಲೀಜು'ಗಳ ಗಾರುಡಿಗನಿಗೆ ಗ್ರಾಮದ ಪ್ರತಿ ನರಪಿಳ್ಳೆಯೂ ಮರ್ಯಾದೆ ಕೊಡುತ್ತಿತ್ತು. ಅದಕ್ಕೆ ಬಲವಾದ ಕಾರಣವೂ ತುಂಬಿತ್ತು. ಇಷ್ಟೆಲ್ಲಾ ಇಂಟ್ರೆಸ್ಟಿಂಗ್ನ ಇಳಿವಯಸ್ಸಿಗನ ಹೆಸರು
ಇಂಥಹ ಅಜ್ಜನ ಸುತ್ತು ಏಳೆಂಟು ನಾಯಿಗಳು ತನ್ನ ನಡುವಿನಲ್ಲಿ ತನ್ನ ಮುಖಗಳನ್ನು ಮುಚ್ಚಿಕೊಂಡು ಮಲಗಿರುತ್ತಿದ್ದವು. ವಿಚಿತ್ರ ಅಂದ್ರೆ, ಸ್ವಲ್ಪ ದೃಷ್ಟಿ ದೋಷ ಪಡೆದಿದ್ದ ತಾತನ ತಟ್ಟೆಯಲ್ಲಿ ಅದೆಷ್ಟೇ ಆಹಾರವಿದ್ದರೂ ತಾತ ತಿಂದು ಉಳಿಸುವವರೆಗೂ ಅಲ್ಲಿಯ ಯಾವ ನಾಯಿಗಳು ದುಡುಕಿ ತಟ್ಟೆಗೆ ಬಾಯಿ ಹಾಕಿದ್ದನ್ನು ಇದುವರೆಗೂ ಯಾರೂ ನೋಡಿರಲಿಲ್ಲ. ಮತ್ತು ಆ ನಾಯಿಗಳು ಯಾವುದೇ ಸಂದರ್ಭದಲ್ಲೂ ಈ ತಾತನನ್ನು ಅಗಲಿ ಆಚೆ ಹೋದದ್ದನ್ನೂ ಕಂಡವರಿಲ್ಲ. ಯಾವಾಗಲೂ ಮಂಪರಿನಲ್ಲೇ ಇದ್ದಂತೆ ಕಾಣುತ್ತಿದ್ದನ ತಾತನ ಚೈತನ್ಯವೇ ಆ ಚಿಲುಮೆ. ತನಗೆ ಬೇಸರವಾದಾಗಲೆಲ್ಲಾ ಒಂದಷ್ಟು ಹೊಗೆಸೊಪ್ಪನ್ನು ಚಿಲುಮೆ ಜಠರಕ್ಕೆ ತುಂಬಿ ಶಿವ ಎನ್ನುತ್ತಾ ಕಡ್ಡಿಗೀರಿ ಎರಡು ಜುರುಮೆ ಜೋರಾಗಿ ಹೊಗೆ ಕುಡಿದನೆಂದರೆ ತಾತನ ಕಪ್ಪು ಗಲ್ಲದ ಮೇಲೆ ಕೆಂಡ ಕನಲುತಿತ್ತು. ವಿಪರೀತ ಹೊಗೆಸೊಪ್ಪು ಸೇದುವುದರ ಜೊತೆಗೆ ಹಲ್ಲುಗಳನ್ನು ಉಜ್ಜದೇ ಇದ್ದ ತಾತನ ಹಲ್ಲುಗಳು ಉಣಸೆ ಬೀಜದ ಬಣ್ಣಕ್ಕೆ ಸೆಡ್ಡು ಹೊಡೆದಿದ್ದವು. ಸ್ವಾದವನ್ನು ಕಳೆದುಕೊಂಡಂತಿದ್ದ ನಾಲಿಗೆಗೆ ಹಸಿರ ಹಾವನ್ನೂ ಅಣಕಿಸುವ ದೈರ್ಯವಿತ್ತು. ಇಷ್ಟೆಲ್ಲಾ 'ಗಲೀಜು'ಗಳ ಗಾರುಡಿಗನಿಗೆ ಗ್ರಾಮದ ಪ್ರತಿ ನರಪಿಳ್ಳೆಯೂ ಮರ್ಯಾದೆ ಕೊಡುತ್ತಿತ್ತು. ಅದಕ್ಕೆ ಬಲವಾದ ಕಾರಣವೂ ತುಂಬಿತ್ತು. ಇಷ್ಟೆಲ್ಲಾ ಇಂಟ್ರೆಸ್ಟಿಂಗ್ನ ಇಳಿವಯಸ್ಸಿಗನ ಹೆಸರು
ಸ್ವರ್ಣಾಕರ.
ಈ ಸ್ವರ್ಣಾಕರ ಹಗಲಿನಲ್ಲಿ ಮಾತ್ರ ಒಂದು ಕಟ್ಟೆಗೆ ಮೂರ್ತಿಯಾಗುತ್ತಿದ್ದ. ಆದರೆ ಕತ್ತಲು ಕಂಗಳನ್ನು ಮೆತ್ತುತ್ತಲೇ ಗ್ರಾಮದ ಸರಕಾರಿ ಶಾಲೆಯತ್ತ ನಡೆದುಬಿಡುತ್ತಿದ್ದ. ಅಲ್ಲಿ ಅವನ ಮೆತ್ತೆಗಳಿದ್ದವು ಬೆಳಗಿನವರೆಗೂ ಅವನ ವಾಸ್ತವ್ಯ ಅಲ್ಲೇ. ಜೊತೆಗೆ ಏಳೆಂಟು ನಾಯಿಗಳ ಸಾಥ್ ಬೇರೆ ಇದ್ದೇ ಇರುತ್ತಿತ್ತು. ಅಷ್ಟಕ್ಕೂ ಈ ಸ್ವರ್ಣಾಕರನಿಗೆ ಆ ಗ್ರಾಮದ ಜನತೆ ಮರ್ಯಾದೆ ಕೊಡಲು ಹಲವು ಕಾರಣಗಳಿದ್ದವು. ಅವನ ದೇಹ ಮಾತ್ರ ಗಲೀಜಾಗಿತ್ತು. ಆದರೆ ತಾತನ ಜೀವನಾನುಭವದ ಮಾನವೀಯ ನಿಲುವುಗಳಿಗೆ ಇವತ್ತಿನ ಸಮಾಜ ಸುಧಾರಕರು, ಪ್ರಜ್ಞಾವಂತರು, ಚಿಂತಕರು, ಊರಲ್ಲಿನ ದೊಡ್ಡೋರು ಅನ್ನಿಸಿಕೊಂಡೋರು, ಸಮಾನತೆಗೆ ಹವಣಿಸೋ, ಹೊಸ ಸಮಾಜದ ಕನಸ ಕಂಗಳೋರು, ಹೀಗೆ ಸಮಾಜದಲ್ಲಿನ ಒಟ್ಟು ವರ್ತುಲದ ಎಲ್ಲರೆಂದರೆಲ್ಲರೂ ತಲೆದೂಗಿ ಅವನ ವಿದ್ವತ್ತಿನ ಮುಂದೆ ನಮ್ಮ ಸರ್ಟಿಫಿಕೆಟ್ ಜ್ಞಾನ ಸುಟ್ಟ ಬದನೇಕಾಯಿ ಎಂಬುದನ್ನು ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಿದ್ದರು. ಇಂಥಹ ವಿಶಿಷ್ಟ ತಾತನಿಗೆ, ಗ್ರಾಮದಲ್ಲಿ ಒಂದೇ ಒಂದು ಕುಟುಂಬದಲ್ಲಿ ಬಿರುಕು ಕಾಣಿಸದ ಹಾಗೆ ಕೂತಲ್ಲಿಂದಲೇ ಕಾವಲು ಕಾಯೋ ವಿಧ್ಯೆ ದೇಹದ ರೋಮ ರೋಮಕ್ಕೂ ಕರಗತವಾಗಿತ್ತು.
ಗ್ರಾಮದಲ್ಲಿ ಯಾರಾದರೂ ಹೊಸ ಉದ್ಯೋಗಕ್ಕೆ ಕೈ ಹಾಕಿದರೆ, ಹೊಸ ಕೆಲಸಕ್ಕೆ ಅರ್ಜಿ ಹಾಕಿದರೆ, ಹೊಸ ಸಂಬಂಧಗಳಿಗೆ ಕೈ ಚಾಚಿದರೆ, ಹೊಸದಾಗಿ ಮಳೆಬಿದ್ದ ಹೊಲಗದ್ದೆಗಳಿಗೆ ಭರವಸೆಯ ಬೀಜಗಳನ್ನು ಬಿತ್ತಬೇಕೆಂದಿದ್ದರೆ, ಲೋಕವರಿಯದ ಮಕ್ಕಳಿಗೆ ನಾಮಕರಣ ಮಾಡಬೇಕಿದ್ದರೆ, ಒಟ್ಟಾರೆಯಾಗಿ ಯಾವುದೇ ಹೊಸ ತಿರುವಿಗೆ ಈ ತಾತನ ಒಂದು ಹಾರೈಕೆಗಾಗಿ ಇಡೀ ಗ್ರಾಮ ಕಾದು ಕುಳಿತುಕೊಳ್ಳುತ್ತಿತ್ತು. ಒಂದು ಲೆಕ್ಕದಲ್ಲಿ ತಾತ ಆ ಗ್ರಾಮದ ಹೈಕಾನ್ ಆದರೂ ವಾಸ್ತವದಲ್ಲಿ ಸಾಧ್ಯವೇ ಇಲ್ಲವೇನೋ ಎಂಬಂಥಹ ಕಲ್ಪನೆಯ ಹೀರೋ ಆಗಿದ್ದರೂ, ಅವನೊಳಗೊಂದು ಈ ಭಂಡ ಸಮಾಜದ ವಿರುದ್ಧ ಅಸಹನೆಯ ಅಗ್ನಿ ಬೆಳಗುತ್ತಲೇ ಇತ್ತು.
ಈ ಸ್ವರ್ಣಾಕರ ಹಗಲಿನಲ್ಲಿ ಮಾತ್ರ ಒಂದು ಕಟ್ಟೆಗೆ ಮೂರ್ತಿಯಾಗುತ್ತಿದ್ದ. ಆದರೆ ಕತ್ತಲು ಕಂಗಳನ್ನು ಮೆತ್ತುತ್ತಲೇ ಗ್ರಾಮದ ಸರಕಾರಿ ಶಾಲೆಯತ್ತ ನಡೆದುಬಿಡುತ್ತಿದ್ದ. ಅಲ್ಲಿ ಅವನ ಮೆತ್ತೆಗಳಿದ್ದವು ಬೆಳಗಿನವರೆಗೂ ಅವನ ವಾಸ್ತವ್ಯ ಅಲ್ಲೇ. ಜೊತೆಗೆ ಏಳೆಂಟು ನಾಯಿಗಳ ಸಾಥ್ ಬೇರೆ ಇದ್ದೇ ಇರುತ್ತಿತ್ತು. ಅಷ್ಟಕ್ಕೂ ಈ ಸ್ವರ್ಣಾಕರನಿಗೆ ಆ ಗ್ರಾಮದ ಜನತೆ ಮರ್ಯಾದೆ ಕೊಡಲು ಹಲವು ಕಾರಣಗಳಿದ್ದವು. ಅವನ ದೇಹ ಮಾತ್ರ ಗಲೀಜಾಗಿತ್ತು. ಆದರೆ ತಾತನ ಜೀವನಾನುಭವದ ಮಾನವೀಯ ನಿಲುವುಗಳಿಗೆ ಇವತ್ತಿನ ಸಮಾಜ ಸುಧಾರಕರು, ಪ್ರಜ್ಞಾವಂತರು, ಚಿಂತಕರು, ಊರಲ್ಲಿನ ದೊಡ್ಡೋರು ಅನ್ನಿಸಿಕೊಂಡೋರು, ಸಮಾನತೆಗೆ ಹವಣಿಸೋ, ಹೊಸ ಸಮಾಜದ ಕನಸ ಕಂಗಳೋರು, ಹೀಗೆ ಸಮಾಜದಲ್ಲಿನ ಒಟ್ಟು ವರ್ತುಲದ ಎಲ್ಲರೆಂದರೆಲ್ಲರೂ ತಲೆದೂಗಿ ಅವನ ವಿದ್ವತ್ತಿನ ಮುಂದೆ ನಮ್ಮ ಸರ್ಟಿಫಿಕೆಟ್ ಜ್ಞಾನ ಸುಟ್ಟ ಬದನೇಕಾಯಿ ಎಂಬುದನ್ನು ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಿದ್ದರು. ಇಂಥಹ ವಿಶಿಷ್ಟ ತಾತನಿಗೆ, ಗ್ರಾಮದಲ್ಲಿ ಒಂದೇ ಒಂದು ಕುಟುಂಬದಲ್ಲಿ ಬಿರುಕು ಕಾಣಿಸದ ಹಾಗೆ ಕೂತಲ್ಲಿಂದಲೇ ಕಾವಲು ಕಾಯೋ ವಿಧ್ಯೆ ದೇಹದ ರೋಮ ರೋಮಕ್ಕೂ ಕರಗತವಾಗಿತ್ತು.
ಗ್ರಾಮದಲ್ಲಿ ಯಾರಾದರೂ ಹೊಸ ಉದ್ಯೋಗಕ್ಕೆ ಕೈ ಹಾಕಿದರೆ, ಹೊಸ ಕೆಲಸಕ್ಕೆ ಅರ್ಜಿ ಹಾಕಿದರೆ, ಹೊಸ ಸಂಬಂಧಗಳಿಗೆ ಕೈ ಚಾಚಿದರೆ, ಹೊಸದಾಗಿ ಮಳೆಬಿದ್ದ ಹೊಲಗದ್ದೆಗಳಿಗೆ ಭರವಸೆಯ ಬೀಜಗಳನ್ನು ಬಿತ್ತಬೇಕೆಂದಿದ್ದರೆ, ಲೋಕವರಿಯದ ಮಕ್ಕಳಿಗೆ ನಾಮಕರಣ ಮಾಡಬೇಕಿದ್ದರೆ, ಒಟ್ಟಾರೆಯಾಗಿ ಯಾವುದೇ ಹೊಸ ತಿರುವಿಗೆ ಈ ತಾತನ ಒಂದು ಹಾರೈಕೆಗಾಗಿ ಇಡೀ ಗ್ರಾಮ ಕಾದು ಕುಳಿತುಕೊಳ್ಳುತ್ತಿತ್ತು. ಒಂದು ಲೆಕ್ಕದಲ್ಲಿ ತಾತ ಆ ಗ್ರಾಮದ ಹೈಕಾನ್ ಆದರೂ ವಾಸ್ತವದಲ್ಲಿ ಸಾಧ್ಯವೇ ಇಲ್ಲವೇನೋ ಎಂಬಂಥಹ ಕಲ್ಪನೆಯ ಹೀರೋ ಆಗಿದ್ದರೂ, ಅವನೊಳಗೊಂದು ಈ ಭಂಡ ಸಮಾಜದ ವಿರುದ್ಧ ಅಸಹನೆಯ ಅಗ್ನಿ ಬೆಳಗುತ್ತಲೇ ಇತ್ತು.
ತಾತ ಎಲ್ಲರೊಂದಿಗೂ ಯಾವುದೇ ಕ್ಷಣದಲ್ಲೂ ಸಲ್ಲುವವನಾಗಿದ್ದರೂ ಒಮ್ಮೊಮ್ಮೆ ಮಾತ್ರ ವಿಪರೀತ ಕೂಗಾಡುತ್ತಿದ್ದ. ಅವನೆದಿರು ಹೋಗಿ ನಿಂತ ಯಾವುದೇ ಪ್ರಶ್ನೆಗೆ ಇಡೀ ಲೋಕ ಒಪ್ಪುವ ಉತ್ತರ ಶತಸಿದ್ಧ. ಆದರೆ ಜಾತಿ, ಜನಾಂಗ, ಧರ್ಮ, ಮೂಢನಂಬಿಕೆ, ಅದರಲ್ಲೂ ದೇವರು, ಮೋಕ್ಷ, ಸ್ವರ್ಗ, ನರಕ, ಪಾಪ, ಪುಣ್ಯ, ಲೌಕಿಕ ಕಟ್ಟುಪಾಡುಗಳು, ಸೀಮಿತ ಎಲ್ಲೆಗಳು, ಗೊಡ್ಡು ಭಕ್ತಿ, ಗೋಸುಂಬೆ ಪರಿಹಾರ, ಇಂಥಹವುಗಳನ್ನು ನೆನೆದರಂತೂ ತಾತ ಅಕ್ಷರಸಹಃ ರುದ್ರನಾಗುತ್ತಿದ್ದ. ಭಯಂಕರನಾಗುತ್ತಿದ್ದ. ಕೆಲವು ಸಾವಿರ ವರ್ಷಗಳಿಂದ ಮಾನವನಿಗೆ ಅಂಟಿದ ಘೋರ ಜಾಡ್ಯಗಳು ಇವುಗಳಲ್ಲದೆ ಮತ್ತೇನೂ ಅಲ್ಲ ಎಂಬುದನ್ನರಿತೇ ತಾತ ಇಡೀ ಹಳ್ಳಿಯಲ್ಲಿ ತನ್ನದೇ ಆದ ಒಂದು ವ್ಯವಸ್ಥೆಯನ್ನು ಕಟ್ಟಿ ಮಾನವೀಯತೆಯ ಕಳಶವನ್ನಿಟ್ಟಿದ್ದ. ಅಸಲಿಗೆ ಸ್ವರ್ಣಾಕರನ ಗ್ರಾಮದಲ್ಲಿ ಯಾರನ್ನು ಹೋಗಿ ಕೇಳಿದರೂ ಯಾರೆಂದರೆ ಯಾರೊಬ್ಬರೂ ತಮ್ಮ ಜಾತಿ, ಧರ್ಮಗಳ ಬಗ್ಗೆ ಉಸಿರು ಎತ್ತುತ್ತಿರಲಿಲ್ಲ. ಅಲ್ಲಿ ಲಿಂಗಬೇಧವಿರಲಿಲ್ಲ. ಮೇಲು ಕೀಳುಗಳಿರಲಿಲ್ಲ. ಹರಿಷಡ್ವರ್ಗಗಳು ತಮ್ಮ ಮಿತಿಯಾಚೆ ಒಂದಿಂಚೂ ಕೈಕಾಲು ಚಾಚಿರಲಿಲ್ಲ. ಅಲ್ಲಿನ ಪ್ರತಿ ಮರದಿಂದ ಬೀಸುವ ಗಾಳಿಗೆ ಹೇಗೆ ಎಲ್ಲರೂ ಅರ್ಹರೋ ಹಾಗೇ ಅವರಿಚ್ಛೆಯಂತೆ ಬದುಕೋಕ್ಕೂ ಅರ್ಹರೇ. ಅಲ್ಲಿ ದೊಡ್ಡವರು ಅನ್ನಿಸಿಕೊಳ್ಳೋ ಹುಂಬತನಕ್ಕೆ ಯಾರೂ ಹೋಗಿರಲಿಲ್ಲ.
ಅಷ್ಟಕ್ಕೂ ಈ ತಾತ ಹಿಟ್ಲರ್ ಅಂತೂ ಅಲ್ಲವಲ್ಲ ? ಅವನಿಗ್ಯಾಕೆ ಇಷ್ಟೊಂದು ಸ್ಕೋಪು ? ಎಲ್ಲರೂ ಅವನಿಗ್ಯಾಕೆ ಸೊಪ್ಪಾಕಬೇಕು ? ಇಡೀ ಗ್ರಾಮದಲ್ಲಿನ ಕೆಲವೇ ಕೆಲವರು ದುರ್ಮನಸ್ಸು ಮಾಡಿದರೆ, ಏಳೆಂಟು ನಾಯಿಗಳಿಗೆ ಬನ್ಗಳನ್ನು ಬಿಸಾಕಿ, ತಾತನ ಉಸಿರು ನಿಲ್ಲಿಸೋದು ಎಷ್ಟೊತ್ತಿನ ಮಾತು ? ಆ ಗ್ರಾಮದ ಗಂಡಸರು ಕೈಗೆ ಬಳೆ ತೊಟ್ಟಿದ್ದರಾ ? ನರಸತ್ತ ನಾಯಿಯಂತೋರು. ಅಂತ ನಮಗನ್ನಿಸಬಹುದು ಆದರೆ ಆ ಗ್ರಾಮದಲ್ಲಿದ್ದ, ಯಾವ ಧರ್ಮಿಯರಿಗೂ ಅನ್ನಿಸುವಂತಿಲ್ಲ. ಯಾಕೆಂದರೆ ಆ ಇಡೀ ಗ್ರಾಮದ ಒಟ್ಟು ಆಸ್ತಿಯ ಮೂಲ ಒಡೆಯ ಈ ಸ್ವರ್ಣಾಕರ. ಭವಿಷ್ಯದ ಸಮಾಜದ ವಾಸ್ತವತೆಯನ್ನು ಅರಿತೋ ಏನೋ ತಾತ, ತನ್ನ ಎಲ್ಲಾ ಆಸ್ತಿಯನ್ನು ತನ್ನ ನಿಲುವುಗಳನ್ನು ಒಪ್ಪಿ ಬದುಕುವವರಿಗೆ ಧಾರೆಯೆರೆದಿದ್ದ. ಗ್ರಾಮದಿಂದ ಸುತ್ತು ಹದಿಮೂರು ಕಿಲೋಮೀಟರ್ ಆಸ್ತಿಯ ದೊರೆ ಅವನು. ಆ ವಿಸ್ತೀರ್ಣದೊಳಗಿನ ಬೆಟ್ಟ ಗುಡ್ಡಗಳ ಮಿತ್ರನವನು. ಅಲ್ಲಿ ಸ್ವರ್ಣಾಕರನ ಎದಿರು ಯಾವ ಅಸಾಮಿಯೂ ಕೆಮ್ಮಂಗಿಲ್ಲ. ಇದ್ದು ತಾತನ ಕಿಮ್ಮತ್ತು.
ಅಷ್ಟಕ್ಕೂ ಈ ತಾತ ಹಿಟ್ಲರ್ ಅಂತೂ ಅಲ್ಲವಲ್ಲ ? ಅವನಿಗ್ಯಾಕೆ ಇಷ್ಟೊಂದು ಸ್ಕೋಪು ? ಎಲ್ಲರೂ ಅವನಿಗ್ಯಾಕೆ ಸೊಪ್ಪಾಕಬೇಕು ? ಇಡೀ ಗ್ರಾಮದಲ್ಲಿನ ಕೆಲವೇ ಕೆಲವರು ದುರ್ಮನಸ್ಸು ಮಾಡಿದರೆ, ಏಳೆಂಟು ನಾಯಿಗಳಿಗೆ ಬನ್ಗಳನ್ನು ಬಿಸಾಕಿ, ತಾತನ ಉಸಿರು ನಿಲ್ಲಿಸೋದು ಎಷ್ಟೊತ್ತಿನ ಮಾತು ? ಆ ಗ್ರಾಮದ ಗಂಡಸರು ಕೈಗೆ ಬಳೆ ತೊಟ್ಟಿದ್ದರಾ ? ನರಸತ್ತ ನಾಯಿಯಂತೋರು. ಅಂತ ನಮಗನ್ನಿಸಬಹುದು ಆದರೆ ಆ ಗ್ರಾಮದಲ್ಲಿದ್ದ, ಯಾವ ಧರ್ಮಿಯರಿಗೂ ಅನ್ನಿಸುವಂತಿಲ್ಲ. ಯಾಕೆಂದರೆ ಆ ಇಡೀ ಗ್ರಾಮದ ಒಟ್ಟು ಆಸ್ತಿಯ ಮೂಲ ಒಡೆಯ ಈ ಸ್ವರ್ಣಾಕರ. ಭವಿಷ್ಯದ ಸಮಾಜದ ವಾಸ್ತವತೆಯನ್ನು ಅರಿತೋ ಏನೋ ತಾತ, ತನ್ನ ಎಲ್ಲಾ ಆಸ್ತಿಯನ್ನು ತನ್ನ ನಿಲುವುಗಳನ್ನು ಒಪ್ಪಿ ಬದುಕುವವರಿಗೆ ಧಾರೆಯೆರೆದಿದ್ದ. ಗ್ರಾಮದಿಂದ ಸುತ್ತು ಹದಿಮೂರು ಕಿಲೋಮೀಟರ್ ಆಸ್ತಿಯ ದೊರೆ ಅವನು. ಆ ವಿಸ್ತೀರ್ಣದೊಳಗಿನ ಬೆಟ್ಟ ಗುಡ್ಡಗಳ ಮಿತ್ರನವನು. ಅಲ್ಲಿ ಸ್ವರ್ಣಾಕರನ ಎದಿರು ಯಾವ ಅಸಾಮಿಯೂ ಕೆಮ್ಮಂಗಿಲ್ಲ. ಇದ್ದು ತಾತನ ಕಿಮ್ಮತ್ತು.
ತಾತನ ಗ್ರಾಮದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ, ಎಲ್ಲಾ ವಿಧದ ಮೀನುಗಳೂ ಅನ್ಯೋನ್ಯತೆಯಿಂದಲೇ ಬದುಕಿದ್ದವು. ಇಂಥಹ ವಿಭಿನ್ನ ಪರಿಸರಕ್ಕೆ ಒಂದು ದಿನ ಅವನು ಕಾಲಿಟ್ಟುಬಿಟ್ಟ. ಹೆಸರು ದುಷ್ಟ ರಾಜಕಾರಣಿ. ತಾತನಿಗೆ ರಾಜಕಾರಣ ಹೊಸತಲ್ಲ. ಆದರೆ ಈ ದುರುಳ ರಾಜಕಾರಣ, ನಂಬಿಸಿ ಕೈ ಹಿಡಿದು ಕಾಡಿಗೆ ಕರೆದೊಯ್ದು ನಂಬಿಕೆಯ ಶಿರದ ಮೇಲೆ ಚಪ್ಪಡಿಯೆಳೆಯುವ ಹೀನ ಬುದ್ಧಿ ಹೊಸತೆಂದರೆ ಹೊಸತು. ಮತ್ತಿದಕ್ಕೆ ಒಮ್ಮೆಲೆ ಬೆವೆತು ದುಂಡಗೆ ಮುದುಡುತ್ತಿದ್ದ. ಅಂಥಹ ವಿದೂಷಕ ಕಾಲಿಟ್ಟು ಮೊದಮೊದಲು ತಾತನಿಗಿಂತಾ ಒಳ್ಳೆಯವನಂತೆ, ನಾಲ್ಕು ದಿನಗಳ ಜಾತ್ರೆಗೆ ಬಂದ ದೇಹಕ್ಕೆ ಯಾಕೆ ಬೇಕು ಇಲ್ಲ ಸಲ್ಲದ ಆಚರಣೆಗಳು, ಎನ್ನುತ್ತಾ ಕ್ರಮೇಣ ಸಮಯ ಸಾಧಿಸುತ್ತಾ ಒಂದೊಂದೇ ಅಸ್ವಸ್ಥ ಮನಸ್ಸುಗಳಲ್ಲಿ ಹತಾಶೆಯ ಜೊತೆಜೊತೆಯೇ, ಅಹಂಕಾರವನ್ನೂ, ಸ್ವಪ್ರತಿಷ್ಠೆಯನ್ನೂ, ಕ್ರಮೇಣ ಧರ್ಮಾಂಧತೆಯನ್ನೂ ತುಂಬಿ ತಾತ ನೋಡ ನೋಡುತ್ತಿದ್ದಂತೆಯೇ ಇಡೀ ಗ್ರಾಮದಲ್ಲಿ ಜಾತಿ, ಧರ್ಮ, ಲಿಂಗ ತಾರತಮ್ಯಗಳಂಥಹ ಕೂಳ ಕೇಕೆಯನ್ನು, ತುಂಬಿಸಿ ಸಮಾಜದಲ್ಲಿ ವಿಷ ಗಾಳಿಯನ್ನು ತುಂಬಿಸಿ ಅದುವರೆಗೂ ತಾತ ಕಂಡುಕೊಂಡು, ಉಸಿರಾಗಿಸಿಕೊಂಡು ಬಂದಿದ್ದ ಸಮಾನ ಮನಸ್ಕ ಸಮಾಜದ ಗೋರಿಯ ಮೇಲೆ ಪೈಶಾಚಿಕ ವಾಸ್ತವಗಳು ಜಾತ್ರೆ ನಡೆಸುವಂತಾಗಿಹೋಯ್ತು.
ಇಂದು ತಾತನ ಗ್ರಾಮದಲ್ಲಿ, ನಮ್ಹಾಜ್ನ ಧ್ವನಿ ಚೂರು ಜೋರಾದರೂ, ಗುಡಿಗಳ ಘಂಟೆಗಳಿಗೆ ಏನೋ ಒಂಥರಾ ಕೋಪ ಬರುತ್ತೆ. ಚರ್ಚಿನಲ್ಲಿ ಮೊಂಬತ್ತಿ ಬೆಳಗಿದರೂ, ಬುದ್ದನೆದಿರು ಧ್ಯಾನಕ್ಕೇರಿದರೂ, ಜಗವೇ ದಿಗಂಬರವೆಂದು ಸಾರಲು ಹೋದರೂ ಒಬ್ಬರನ್ನು ಕಂಡರೆ ಒಬ್ಬರಿಗಾಗದಂತೆ, ಅಷ್ಟೇ ಏಕೆ ? ಹೆತ್ತವರ ಮಾತನ್ನು ಹಸುಳೆಗಳೂ ಕೇಳದಂತೆ, ಬಿತ್ತಿದ ಬೀಜಗಳಿಗೆ ಭೂತಾಯಿಯೇ ಕೈ ಕೊಡುವಂತೆ ವ್ಯವಸ್ಥಿತ ಪತನ ತಾತನ ಕಂಗಳಲ್ಲಿ ನೀರುಕ್ಕಿಸುತ್ತೆ. ವಿಪರ್ಯಾಸವೆಂದರೆ, ಈಗಲೂ ತಾತ ಅದೇ ಕಟ್ಟೆಯ ಮೇಲೆ ಮತ್ತದೇ ದೈನೇಸಿ ಸ್ಥಿತಿಯಲ್ಲಿ ಕುಳಿತಿರುತ್ತಾನೆ. ಆದರೆ ಈಗವನ ತಟ್ಟೆ ತುಂಬೋದು ತಂಗಳು ಮಾತ್ರ. ಈಗ ಅವನೆದಿರು ಯಾರೂ ಯಾವ ಅಪ್ಪಣೆಗೂ ಕಾಯುತ್ತಿಲ್ಲ, ಕಾರಣ ಕಾನೂನಿನ ರಕ್ಷಣೆಯಲ್ಲಿ ಈಗ ಅಷ್ಟೂ ಆಸ್ತಿ ತಾತನದ್ದಲ್ಲವೇ ಅಲ್ಲ.
ಆದರೆ ಈಗಲೂ ಆ ತಾತನಿಗೆ ಜೊತೆಯಿರೋದು ಆ ಏಳೆಂಟು ನಾಯಿಗಳು ಮತ್ತವನ ಚಿಲುಮೆ. ಎಂದಿನಂತೆ ಇಂದು ಕೂಡಾ ಗ್ರಾಮದ ಅನಕ್ಷರಸ್ಥೆಯಾದ ಚೊಚ್ಚಲ ಮಗುವಿನ ತಾಯಿ ಈ ತಾತನ ಬಳಿ ತನ್ನ ಮಗುವನ್ನೆತ್ತಿಕೊಂಡು ಬಂದು 'ತಾತಾ ನಿನ್ನ ಮೊಮ್ಮಗಳಿಗೊಂದು ಹೆಸರಿಡು, ಮುಂದೆ ನಿನ್ನ ಕನಸುಗಳನ್ನು ಇವಳು ಸಾಕಾರಗೊಳಿಸಲಂತ ಹಾರೈಸು. ಚಿಂತಿಸದಿರು ತಾತಾ, ಕತ್ತಲು ಬರೋದೇ ಹೊಸ ಬೆಳಗು ಕಾಣೋಕ್ಕೆ. ಇಡೀ ಜಗತ್ತು ಎಲ್ಲವನ್ನೂ ಮರೆತು ಸ್ವಾರ್ಥದೂಟಕ್ಕೆ ಪಂಕ್ತಿಯಲ್ಲಿ ಕುಳಿತಿದ್ದರೂ ಇಂದಿಗೂ ನಿನ್ನಂಥಹ ನಿಲುವಿನ ಕೆಲವು ಚಿಗುರುಗಳಿವೆ. ಕಾಲ ಸವೆಯುತ್ತಾ, ಆ ಸಂತತಿ ಹೆಚ್ಚಾಗಿ ಮತ್ತದೇ ನಿನ್ನ ಕನಸಿನ ಸಮಾಜ ಹುಟ್ಟಿಯೇ ತಿರುತ್ತೆ ಹೆಸರಿಡು ಒಂದು ಈ ನನ್ನ ಚೊಚ್ಚಲಿಗೆ. ಎಂದಾಗ ತಾತ ತೇಜಮ್ಮ... ಅಂತ ಆ ಮಗುವಿನ ಕಿವಿಯಲ್ಲಿ ಮೂರು ಬಾರಿ ಹೇಳುತ್ತಲೇ ಆ ಮಗುವಿನ ತಾಯಿ ತಾತನ ಕೈಗೆ ಹೋಳಿಗೆ ಕೊಟ್ಟು ಕಾಲಿಗೆ ಬಿದ್ದು , ಮಗುವನ್ನೂ ತಾತನ ಕಾಲಿಗೆ ಬೀಳಿಸಿ ಅವನ ಅಂಗಾಲ ಧೂಳನ್ನು ತೇಜುವಿನ ಹಣೆಗೆ ಹಚ್ಚಿ ಅಲ್ಲಿಂದ ಹೊರಟು ಹೋದಳು. ತುಂಬಾ ದಿನಗಳ ನಂತರ ತಾತನ ಸುಡುಗಾಡಿನಂತಾಗಿದ್ದ ಮನಸಲ್ಲಿ ಹೊಸ ಭರವಸೆಯ ನೆಮ್ಮದಿ ಕಂಡಿತ್ತು. ಹುಣ್ಣಿಮೆ ನಗುವಿನ ಸಾವಧಾನ ದಕ್ಕಿತ್ತು. ಯಾವಾಗ ದಿಲ್ ಖುಷ್ ಆಯ್ತೋ ತಾತ ತನ್ನ ಜುಬ್ಬಾದ ಜೇಬಿನಿಂದ ತನ್ನ ಚೈತನ್ಯದ ಚಿಲುಮೆಯನ್ನು ತೆಗೆದು ಮತ್ತದೇ ಮೂರು ಮೈಲಿ ಘಂಗುಡುವ ಹೊಗೆಸೊಪ್ಪು ತುಂಬಿ ಸಾವಿರ ಕನಸುಗಳ ಮದ್ದು ಗೀಚಿ ಶಿವಾ ಎಂದೊಮ್ಮೆ ನೆನೆದು ಗಾಢವಾಗಿ ಹೊಗೆಯನ್ನು ನುಂಗಿ ಖುಷಿಪಟ್ಟ...
ಆದರೆ ಈಗಲೂ ಆ ತಾತನಿಗೆ ಜೊತೆಯಿರೋದು ಆ ಏಳೆಂಟು ನಾಯಿಗಳು ಮತ್ತವನ ಚಿಲುಮೆ. ಎಂದಿನಂತೆ ಇಂದು ಕೂಡಾ ಗ್ರಾಮದ ಅನಕ್ಷರಸ್ಥೆಯಾದ ಚೊಚ್ಚಲ ಮಗುವಿನ ತಾಯಿ ಈ ತಾತನ ಬಳಿ ತನ್ನ ಮಗುವನ್ನೆತ್ತಿಕೊಂಡು ಬಂದು 'ತಾತಾ ನಿನ್ನ ಮೊಮ್ಮಗಳಿಗೊಂದು ಹೆಸರಿಡು, ಮುಂದೆ ನಿನ್ನ ಕನಸುಗಳನ್ನು ಇವಳು ಸಾಕಾರಗೊಳಿಸಲಂತ ಹಾರೈಸು. ಚಿಂತಿಸದಿರು ತಾತಾ, ಕತ್ತಲು ಬರೋದೇ ಹೊಸ ಬೆಳಗು ಕಾಣೋಕ್ಕೆ. ಇಡೀ ಜಗತ್ತು ಎಲ್ಲವನ್ನೂ ಮರೆತು ಸ್ವಾರ್ಥದೂಟಕ್ಕೆ ಪಂಕ್ತಿಯಲ್ಲಿ ಕುಳಿತಿದ್ದರೂ ಇಂದಿಗೂ ನಿನ್ನಂಥಹ ನಿಲುವಿನ ಕೆಲವು ಚಿಗುರುಗಳಿವೆ. ಕಾಲ ಸವೆಯುತ್ತಾ, ಆ ಸಂತತಿ ಹೆಚ್ಚಾಗಿ ಮತ್ತದೇ ನಿನ್ನ ಕನಸಿನ ಸಮಾಜ ಹುಟ್ಟಿಯೇ ತಿರುತ್ತೆ ಹೆಸರಿಡು ಒಂದು ಈ ನನ್ನ ಚೊಚ್ಚಲಿಗೆ. ಎಂದಾಗ ತಾತ ತೇಜಮ್ಮ... ಅಂತ ಆ ಮಗುವಿನ ಕಿವಿಯಲ್ಲಿ ಮೂರು ಬಾರಿ ಹೇಳುತ್ತಲೇ ಆ ಮಗುವಿನ ತಾಯಿ ತಾತನ ಕೈಗೆ ಹೋಳಿಗೆ ಕೊಟ್ಟು ಕಾಲಿಗೆ ಬಿದ್ದು , ಮಗುವನ್ನೂ ತಾತನ ಕಾಲಿಗೆ ಬೀಳಿಸಿ ಅವನ ಅಂಗಾಲ ಧೂಳನ್ನು ತೇಜುವಿನ ಹಣೆಗೆ ಹಚ್ಚಿ ಅಲ್ಲಿಂದ ಹೊರಟು ಹೋದಳು. ತುಂಬಾ ದಿನಗಳ ನಂತರ ತಾತನ ಸುಡುಗಾಡಿನಂತಾಗಿದ್ದ ಮನಸಲ್ಲಿ ಹೊಸ ಭರವಸೆಯ ನೆಮ್ಮದಿ ಕಂಡಿತ್ತು. ಹುಣ್ಣಿಮೆ ನಗುವಿನ ಸಾವಧಾನ ದಕ್ಕಿತ್ತು. ಯಾವಾಗ ದಿಲ್ ಖುಷ್ ಆಯ್ತೋ ತಾತ ತನ್ನ ಜುಬ್ಬಾದ ಜೇಬಿನಿಂದ ತನ್ನ ಚೈತನ್ಯದ ಚಿಲುಮೆಯನ್ನು ತೆಗೆದು ಮತ್ತದೇ ಮೂರು ಮೈಲಿ ಘಂಗುಡುವ ಹೊಗೆಸೊಪ್ಪು ತುಂಬಿ ಸಾವಿರ ಕನಸುಗಳ ಮದ್ದು ಗೀಚಿ ಶಿವಾ ಎಂದೊಮ್ಮೆ ನೆನೆದು ಗಾಢವಾಗಿ ಹೊಗೆಯನ್ನು ನುಂಗಿ ಖುಷಿಪಟ್ಟ...





No comments:
Post a Comment